ಪುಣ್ಯ ಮೂರ್ತಿ

ಬಾಳ ಹೊಳೆ ಬತ್ತಿ
ದಡಗಳೆರಡು ಒಣಗಿ
ಪಾತ್ರವು ವಿಕಾರವಾಗಿ ತೆರೆದುಕೊಂಡು
ನರಳುವ ನಡುವೆ
ಜೀವ ಸೆಲೆಯಾಗಿ ಬಂದ ದೌಹಿತ್ರ
ಚೆಂದಂಪು ತುಂಬಿತು.

ಕುಸಿಯುತ್ತಿದ್ದ ಮನೆ, ಮನಸಿನಲಿ
ಪ್ರಾಣ ವಾಯು ಪಲ್ಲವಿಸಿ
ಕೈ ಜಾರಿ ಹೋಗುತ್ತಿದ್ದ ಬದುಕು
ಮರಳಿ
ತಕ್ಕೈಸಿಕೊಂಡಿತು.

ಮೌನ ಸೊನ್ನೆ ತೆರವಾಗಿ
ಮುದ್ದು ಮಾತು ಹರಿದಾಡಿ
ಜೀವೋತ್ಸಾಹ ತಂಗಾಳಿ
ಮೊರೆಯ ತೊಡಗಿತು.

ಜಡವಾಗಿ
ಮೂಲೆ ಹಿಡಿದು ಕೂತಿದ್ದೆಲ್ಲ
ರೂಪು, ಲಾವಣ್ಯ ಪಡೆದು
ಉತ್ಸಾಹದ ಉತ್ಸವ ಹೊರಟಿತು.

ಸೂತ್ರದಾರ ಪೋರ
ಮರವೆಯಾಗಿದ್ದ, ಮಾಡದೆ ಉಳಿದಿದ್ದ
ಮಾಡುವಂತೆ ಮುಂದುಮಾಡಿ
ಪುಣ್ಯ ಮೂರ್ತಿಯಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಯಕ್ರಮ
Next post ಸೋರುವ ತೂತು ಮುಚ್ಚ ಬೇಡವೇ ?

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys